Wednesday, January 6, 2010


ಸಾಧಕರಿಗೆ ಸನ್ಮಾನ - ಬಹುಮಾನ ವಿತರಣೆ
ರೈತ ದಿನ - ಅರ್ಥಪೂರ್ಣ ಆಚರಣೆ
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ, ಕೃಷಿ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಕೃಷಿ ಕ್ಷೇತ್ರದ ಇತ್ತೀಚಿನ ಮಾಹಿತಿ ನೀಡುವ ಮೂಲಕ ರೈತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೈಸೂರು ಜಿಲ್ಲಾ ಪಂಚಾಯತ್ನ ಕೃಷಿ, ತೋಟಗಾರಿಕೆ, ಜಲಾನಯನ ಅಭಿವೃದ್ಧಿ, ರೇಷ್ಮೆ, ಪಶುಪಾಲನೆ ಮತ್ತು ಮೀನುಗಾರಿಕೆ, ವಾರ್ತಾ ಇಲಾಖೆ ಹಾಗೂ ಆಕಾಶವಾಣಿ, ಮೈಸೂರು ಸಹಯೋಗದೊಡನೆ ಜೆ.ಎಸ್.ಎಸ್. ಅಂಗವಿಕಲರ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ರೈತ ದಿನ ಆಚರಿಸಲಾಯಿತು.
ಬಾನುಲಿ ಕೃಷಿ ಪ್ರಶಸ್ತಿ ಪಡೆದ ಹನುಮನಹಳ್ಳಿ ಇಂದಿರಮ್ಮ, ಕೃಷಿ ವಿಶ್ವವಿದ್ಯಾನಿಲಯದಿಂದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ಪಡೆದ ನಂಜನಗೂಡು ತಾಲ್ಲೂಕು ಸಿಂಧುವಳ್ಳಿ ಗ್ರಾಮದ ಶ್ರೀಮತಿ ರಾಜೇಶ್ವರಿ, ಕೃಷಿ ವಿ.ವಿ. ಅತ್ಯುತ್ತಮ ರೈತ ಪ್ರಶಸ್ತಿ ಪಡೆದ ನಂಜನಗೂಡು ತಾಲ್ಲೂಕು ಮುದ್ದಹಳ್ಳಿ ನವಿಲೂರು ಗ್ರಾಮದ ಚಿಕ್ಕದೇವಯ್ಯ ಅವರುಗಳನ್ನು ಸನ್ಮಾನಿಸಲಾಯಿತು.
ಕೃಷಿ ಇಲಾಖೆ ಆಯೋಜಿಸಿದ್ದ ದ್ವಿದಳ ದೀಪ ರಸಪ್ರಶ್ನೆ ಸ್ಪರ್ದೆಯಲ್ಲಿ ವಿಜೇತರಾದ 30ಕ್ಕೂ ಹೆಚ್ಚು ರೈತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ: ಎನ್. ಮಂಜುಳಾ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವ ಮೂಲಕ ರೈತಪರ ಕಾರ್ಯಕ್ರಮಗಳನ್ನು ಗ್ರಾಮೀಣ ಜನರಿಗೆ ತಲುಪಿಸಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಮೂಲ ಸೌಲಭ್ಯ ಕಲ್ಪಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಕೃಷಿ ಹೊಂಡ ನಿರ್ಮಾಣವು ಸೇರಿದಂತೆ ಜಮೀನು ಸುಧಾರಣೆಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅವಕಾಶ ಇದೆ. ಸಾಮಗ್ರಿ ವೆಚ್ಚ ನೀಡುವುದೂ ಸೇರಿದಂತೆ ರೈತರು ತಮ್ಮ ಜಮೀನಿನಲ್ಲಿ ಮಾಡುವ ಕೆಲಸಕ್ಕೂ ಕೂಲಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಕೃಷಿ ವಿಜ್ಞಾನಿ ಡಾ ಅರಸು ಮಲ್ಲಯ್ಯ ಅವರು ಮಾತನಾಡಿ ಹವಾಮಾನ ವೈಪರೀತ್ಯದಿಂದ ಮಣ್ಣಿನ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದ್ದು, ಶೇ. 20 ರಿಂದ 40ರಷ್ಟು ಇಳುವರಿ ಕುಂಠಿತವಾಗುತ್ತಿದೆ. ರೈತರು ಸ್ವತ: ವಿಜ್ಞಾನಿಗಳಾಗುವ ಮೂಲಕ, ಪ್ರಯೋಗಶೀಲರಾಗುವ ಮೂಲಕ ಇಂತಹ ದುಷ್ಪರಿಣಾಮಗಳನ್ನು ನಿವಾರಿಸಿಕೊಳ್ಳಬೇಕು ಎಂದು ಹೇಳಿದರು.
ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀ ಜಯಣ್ಣ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ: ರಾಘವ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ: ನಾಗರಾಜ್ ಅವರು ತೋಟಗಾರಿಕೆ ಮಾಹಿತಿ ನೀಡಿದರು. ರೇಷ್ಮೆ ಇಲಾಖೆ ಉಪನಿರ್ದೇಶಕ ಡಾ: ಚಿಗರಿ ತಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು. ರೇಷ್ಮೆ ಕೃಷಿಗೆ ಸಂಬಂಧಿಸಿದ 15 ಕಾಮಗಾರಿಗಳನ್ನು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಹೇಳಿದರು.
ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾ 30ಕ್ಕೂ ಹೆಚ್ಚು ದೇಶಿ ಭತ್ತದ ತಳಿ ಸಂರಕ್ಷಣೆ ಮಾಡಿರುವ ಕೃಷಿಕ ಟಿ. ನರಸೀಪುರ ತಾಲ್ಲೂಕು ಸಿದ್ದನಹುಂಡಿ ಗ್ರಾಮದ ಶ್ರೀ ಶ್ರೀನಿವಾಸ ಮೂರ್ತಿ ತಮ್ಮ ಕೃಷಿ ಅನುಭವ ಹಂಚಿಕೊಂಡರು. ಬಿತ್ತನೆ ಬೀಜಗಳಿಗೆ ಬಹುರಾಷ್ಟ್ರೀಯ ಕಂಪನಿಗಳನ್ನು ಅವಲಂಬಿಸುವ ಬದಲಿಗೆ ಸ್ವಾವಲಂಬನೆ ಸಾಧಿಸಿ, ಅಪರೂಪದ ತಳಿಗಳನ್ನು ಸಂರಕ್ಷಿಸಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ನ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಡಿ. ರವಿಶಂಕರ್, ಜಿಲ್ಲಾ ಪಂಚಾಯತ್ ಸದಸ್ಯ ಚೋಳರಾಜು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ: ವಿಷಕಂಠ ಸ್ವಾಗತಿಸಿದರು. ವಾರ್ತಾ ಇಲಾಖೆ ಉಪನಿರ್ದೇಶಕ ಶ್ರೀ .ಆರ್. ಪ್ರಕಾಶ್, ಆಕಾಶವಾಣಿ ಪ್ರಸಾರ ನಿರ್ವಾಹಕ ಶ್ರೀ ಕೇಶವಮೂರ್ತಿ ಉಪಸ್ಥಿತರಿದ್ದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀ ಸೋಮಶೇಖರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಕೃಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೃಷಿ ಉದ್ಯಮಶೀಲತಾ ಕಾರ್ಯಗಾರ

ಕೃಷಿಕರು ಉದ್ಯಮಶೀಲರಾಗುವ ಮೂಲಕ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ವಿಜಯಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಶ್ರೀ ನಾಗೇಶ್ವರರಾವ್ ಹೇಳಿದರು.
ಮಂಡ್ಯದ ವಿಜಯಾ ಬ್ಯಾಂಕ್ ಸ್ವ ಉದ್ಯೋಗಿ ತರಬೇತಿ ಸಂಸ್ಥೆ, ಮೈಸೂರು ಆಕಾಶವಾಣಿ, ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆ, ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಹಾಗೂ ಬಾನುಲಿ ಕೃಷಿಕರ ಬಳಗದ ಸಂಯುಕ್ತಾಶ್ರಯದಲ್ಲಿ ಮಂಡ್ಯದಲ್ಲಿ ಏರ್ಪಡಿಸಿರುವ ಐದು ದಿನಗಳ ಕೃಷಿ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರೈತ ಸಮುದಾಯ, ಸಾಂಪ್ರದಾಯಿಕ ಕೃಷಿ ಜೊತೆಗೆ ಹೊಸ ಆಲೋಚನಾ ವಿಧಾನ ರೂಢಿಸಿಕೊಳ್ಳಬೇಕು. ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ತಾವು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆದುಕೊಳ್ಳಬೇಕು. ಮಾರುಕಟ್ಟೆ ಅವಕಾಶಗಳ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಕೃಷಿಯಲ್ಲಿ ಉದ್ಯಮಶೀಲತೆ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಇಂದಿನ ದಿನಗಳಲ್ಲಿ ಅತೀ ಅವಶ್ಯ. ಬೆಲೆ ಕುಸಿತದ ದಿನಗಳಲ್ಲಿ ಪರ್ಯಾಯ ಮಾರುಕಟ್ಟೆ ಬಗ್ಗೆ ಆಲೋಚಿಸಬೇಕು. ಹತಾಶ ಮಾರಾಟಕ್ಕೆ ಮೊರೆ ಹೋಗದೆ, ಮಾರುಕಟ್ಟೆ ತಂತ್ರಗಳನ್ನು ಅರಿತು, ಅಳವಡಿಸಿಕೊಳ್ಳುವ ಮೂಲಕ ತಮ್ಮ ಉತ್ಪನ್ನಗಳಿಗೆ ಯೋಗ್ಯ ಬೆಲೆ ಪಡೆಯಬೇಕು. ಈ ನಿಟ್ಟಿನಲ್ಲಿ ಕಾರ್ಯಗಾರ ಏರ್ಪಡಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶ್ರೀ ನಾಗೇಶ್ವರರಾವ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಬಾರ್ಡ್ ವ್ಯವಸ್ಥಾಪಕ ಟಿ. ರಾಮಸ್ವಾಮಿ ಅವರು ಮಾತನಾಡಿ ನಬಾರ್ಡ್ ವತಿಯಿಂದ ರಾಷ್ಟ್ರದಲ್ಲಿ 34 ಸಾವಿರ ರೈತರ ಕೂಟಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ರಾಜ್ಯದಲ್ಲಿ 3 ಸಾವಿರ ರೈತಕೂಟಗಳು ಇದ್ದು, ಮಂಡ್ಯ ಜಿಲ್ಲೆಯಲ್ಲಿ 82 ಕೂಟಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕೂಟಗಳ ಮೂಲಕ ಕೃಷಿ ಅಭಿವೃದ್ಧಿಗೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಗ್ರಾಮೀಣ ಅವಿಷ್ಕಾರ ನಿಧಿ ಸ್ಥಾಪಿಸುವ ಮೂಲಕ ನಬಾರ್ಡ್ ಹೊಸದಾಗಿ ಉದ್ಯಮ ಆರಂಭಿಸುವವರಿಗೆ ನೆರವು ನೀಡುತ್ತಿದೆ ಎಂದು ಶ್ರೀ ರಾಮಸ್ವಾಮಿ ಹೇಳಿದರು.
ರೈತರು ವಿಜ್ಞಾನಿ, ವ್ಯಾಪಾರಿ ಎಲ್ಲವೂ ಆಗುವ ಮೂಲಕ ಕೃಷಿ ಕ್ಷೇತ್ರಕ್ಕೆ ಚೈತನ್ಯ ನೀಡಬೇಕು. ಕೃಷಿ ಲಾಭದಾಯಕ ಉದ್ದಿಮೆ ಆಗುವಂತೆ ಮಾಡಲು ರೈತರಿಗೆ ಇಂತಹ ಕಾರ್ಯಗಾರ ಗಳ ಮೂಲಕ ಪ್ರೇರಣೆ ನೀಡಬೇಕಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ರಾವ್ ಅಭಿಪ್ರಾಯಪಟ್ಟರು.
ವಿಕಸನ ಸಂಸ್ಥೆಯ ಮಹೇಶ್ಚಂದ್ರ ಗುರು, ಆಕಾಶವಾಣಿ ಕಾರ್ಯಕ್ರಮಗಳ ನಿರ್ವಾಹಕ ಶ್ರೀ ವಿ.ಮಾ. ಜಗದೀಶ್, ವಾರ್ತಾ ಇಲಾಖೆ ಉಪನಿರ್ದೇಶಕ ಶ್ರೀ ಎ.ಆರ್. ಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಜಯಾಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಶ್ರೀ ಬಾಲಸುಬ್ರಹ್ಮಣ್ಯಂ ಸ್ವಾಗತಿಸಿದರು. ಆಕಾಶವಾಣಿ ಮೈಸೂರು ಪ್ರಸಾರ ನಿರ್ವಾಹಕ ಶ್ರೀ ಎಸ್. ಕೇಶವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ 5 ದಿನಗಳ ಶಿಬಿರದ ಉದ್ದೇಶ ವಿವರಿಸಿದರು. ಕೃಷಿಕ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಮತ್ತಿತರ ಜಿಲ್ಲೆಗಳ ನಲವತ್ತಕ್ಕೂ ಹೆಚ್ಚು ರೈತರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು .










Sunday, September 6, 2009






ಮಂಡ್ಯ ತಾಲೂಕು ಎಸ. ಐ.ಕೋಡಿ ಹಳ್ಳಿಯಲ್ಲಿ ಬಾನುಲಿ ಬೆಳಗು
ಮಂಡ್ಯ ತಾಲೂಕು ಎಸ. ಐ . ಕೋಡಿ ಹಳ್ಳಿಯಲ್ಲಿ ಕೆ. ಎಸ. ಮೃತ್ಯುಂಜಯ ಹಾಗು ಕೆ. ಎಸ. ತೋಂಟದಾರ್ಯ ಸ್ವಾಮಿ ಅವರ ತೋಟದಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ನಡೆಯಿತು .ಕೆಲವು ಚಿತ್ರಗಳು. ಸೋಲಾರ್ ಎನರ್ಜಿ ಬಗ್ಗೆ ಮಹೇಶ್ ಅವರ ಭಾಷಣ ಕಾರ್ಯ ಕ್ರಮದ ವಿಶೇಷ .





ಮಂಡ್ಯ ತಾಲೂಕು ಎಸ. ಐ.ಕೋಡಿ ಹಳ್ಳಿಯಲ್ಲಿ ಬಾನುಲಿ ಬೆಳಗು
ಮಂಡ್ಯ ತಾಲೂಕು ಎಸ. ಐ . ಕೋಡಿ ಹಳ್ಳಿಯಲ್ಲಿ ಕೆ. ಎಸ. ಮೃತ್ಯುಂಜಯ ಹಾಗು ಕೆ. ಎಸ. ತೋಂಟದಾರ್ಯ ಸ್ವಾಮಿ ಅವರ ತೋಟದಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ನಡೆಯಿತು .ಕೆಲವು ಚಿತ್ರಗಳು. ಸೋಲಾರ್ ಎನರ್ಜಿ ಬಗ್ಗೆ ಮಹೇಶ್ ಅವರ ಭಾಷಣ ಕಾರ್ಯ ಕ್ರಮದ ವಿಶೇಷ .





ಮಂಡ್ಯ ತಾಲೂಕು ಎಸ. ಐ.ಕೋಡಿ ಹಳ್ಳಿಯಲ್ಲಿ ಬಾನುಲಿ ಬೆಳಗು
ಮಂಡ್ಯ ತಾಲೂಕು ಎಸ. ಐ . ಕೋಡಿ ಹಳ್ಳಿಯಲ್ಲಿ ಕೆ. ಎಸ. ಮೃತ್ಯುಂಜಯ ಹಾಗು ಕೆ. ಎಸ. ತೋಂಟದಾರ್ಯ ಸ್ವಾಮಿ ಅವರ ತೋಟದಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ನಡೆಯಿತು .ಕೆಲವು ಚಿತ್ರಗಳು. ಸೋಲಾರ್ ಎನರ್ಜಿ ಬಗ್ಗೆ ಮಹೇಶ್ ಅವರ ಭಾಷಣ ಕಾರ್ಯ ಕ್ರಮದ ವಿಶೇಷ .




ಅಗಸ್ಟ್ ೩೧/೨೦೦೯/ರಾಜೂರಿನ ಮರಿಸ್ವಾಮಪ್ಪ ಅವರ ತೋಟದಲ್ಲಿ ನಡೆದ ಕಾರ್ಯಕ್ರಮದ ಚಿತ್ರಗಳು



ಮರಿಸ್ವಾಮಪ್ಪ ಅವರ ತೋಟದಲ್ಲಿ ಬಾನುಲಿಬೆಳಗು.

ರಾಜೂರಿನ ಮರಿಸ್ವಾಮಪ್ಪ ಅವರ ತೋಟದಲ್ಲಿ ಅಗಸ್ಟ್ ೩೧ /೨೦೦೯ ರಂದು ನಡೆದ ಬಾನುಲಿ ಕೃಷಿ ಬೆಳಗು ಕಾರ್ಯ ಕ್ರಮದ ಹಲವು ಚಿತ್ರಗಳು .ಜೈವಿಕ ಇಂದನ ಕಾರ್ಯಪಡೆ ಅಧ್ಯಕ್ಷ ವಯ್.ಬಿ .ರಾಮಕೃಷ್ಣ ಕಾರ್ಯ ಕ್ರಮದ ಮುಖ್ಯ ಅತಿಥಿ .