Friday, January 28, 2011

ಮೈಸೂರು ಆಕಾಶವಾಣಿ :
ರಾಜ್ಯಮಟ್ಟದ ಕೃಷಿ ಸಾಧನಾ ಸಮಾವೇಶ
- ಆಕಾಶವಾಣಿ ಮೈಸೂರು ತನ್ನ ಅಮೃತ ಮಹೋತ್ಸವ ವರ್ಷ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿರುವ ರಾಜ್ಯ ಮಟ್ಟದ ಮೈಸೂರು ಆಕಾಶವಾಣಿ ಕೃಷಿ ಸಾಧನಾ ಸಮಾವೇಶ ವನ್ನು ಜನವರಿ 31, 2011ರಂದು ಸಂಜೆ 5 ಗಂಟೆಗೆ ಮೈಸೂರಿನ ಜಯಲಕ್ಷ್ಮಿಪುರಂನ ಮಹಾಜನ ಕಾಲೇಜು ಆವರಣದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಏರ್ಪಡಿಸಿದೆ.
ಜಿಲ್ಲಾಧಿಕಾರಿ ಶ್ರೀ ಹರ್ಷಗುಪ್ತ ಕಾರ್ಯಕ್ರಮ ಉದ್ಘಾಟಿಸುವರು. ಕೃಷಿವಾಣಿ: ನುಡಿಸಂಚಿಕೆಯನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಸಾವಯವ ಕೃಷಿ ಮಿಷನ್ನ ಅಧ್ಯಕ್ಷ ಡಾ: ಆನಂದ್ ಲೋಕಾರ್ಪಣೆ ಮಾಡುವರು. ಶ್ರೀ ವಾಲ್ಮೀಕಿ ಶ್ರೀನಿವಾಸ ಅಯ್ಯಂಗಾರ್ಯ ಅವರು ವೇದಕೃಷಿ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಜೈವಿಕ ಇಂಧನ ಕಾರ್ಯಪಡೆ ಅಧ್ಯಕ್ಷ ಶ್ರೀ ವೈ.ಬಿ. ರಾಮಕೃಷ್ಣ ಅವರು ಬಾನುಲಿ ಕೃಷಿಕರ ಕಂಪನಿ (ಪ್ರೈ) ಲಿಮಿಟೆಡ್ನ್ನು ಸಮರ್ಪಿಸುವರು . ಬಾನುಲಿ ಕೃಷಿ ಬೆಳಗು ಅಭಿನಂದನಾ ಪತ್ರವನ್ನು ಬೆಂಗಳೂರು ಆಕಾಶವಾಣಿ ನಿಲಯ ನಿರ್ದೇಶಕ ಡಾ: ಚೇತನ್ ಎಸ್. ನಾಯಕ್ ವಿತರಿಸುವರು. ಮೈಸೂರು ಆಕಾಶವಾಣಿ ನಿಲಯ ನಿರ್ದೇಶಕ ಡಾ: ಎಂ.ಎಸ್. ವಿಜಯಾ ಹರನ್ ಬಾನುಲಿ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡುವರು.

No comments:

Post a Comment