Monday, August 3, 2009


ನಿರುದ್ಯೋಗ ನಿವಾರಣೆಗೆ ಆಸರೆ
ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ

ಮಂಡ್ಯ ಜಿಲ್ಲೆಯಲ್ಲಿ ನಿರುದ್ಯೋಗವನ್ನು ನಿವಾರಣೆ ಮಾಡಿ. ಜಿಲ್ಲೆಯ ಯುವಕ-ಯುವತಿಯರಿಗೆ ಉದ್ಯೋಗ ಸೃಷ್ಟಿ ಮಾಡುವ ದಿಸೆಯಲ್ಲಿ, ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ತರಬೇತಿ ನೀಡುತ್ತಿದೆ. ಜಿಲ್ಲೆಯಲ್ಲಿರುವ ರೈತರ ಸ್ವಾವಲಂಬನೆ ಬದುಕಿಗಾಗಿ, ಪ್ರತಿ ತಿಂಗಳು ರೈತರ ಜಮೀನಿನಲ್ಲಿ ನಡೆಯುವ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಲ್ಲೂ ಭಾಗವಹಿಸುತ್ತಾ ಇದೆ. 2006-07 ಇಸ್ವಿಯಲ್ಲಿ, ತರಬೇತಿ ಸಂಸ್ಥೆಯಲ್ಲೇ, 6 ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
2008-09 ಇಸ್ವಿಯಲಿ, 3 ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

'ಜೈವಿಕ ಇಂಧನ ಬೆಳೆಗಳ' ಕುರಿತು 3 ದಿನಗಳ ತರಬೇತಿ, 26.06.2008 ರಿಂದ 28.06.2008 ರವರೆಗೆ.'ಸುಸ್ಥಿರ ಬದುಕಿಗಾಗಿ ಸಮಗ್ರ ಕೃಷಿ' ಬಗ್ಗೆ 5 ದಿನಗಳ ತರಬೇತಿ, 16.12.2008 ರಿಂದ 20.12.2008 ರವರೆಗೆ. 3 ದಿನಗಳ ಎಮೆರ್ಜೆನ್ಸಿ ಲೈಟ್ ತಯಾರಿಕೆ ತರಬೇತಿ, 05.03.2009 ರಿಂದ 07.03.2009 ರವರೆಗೆ ಏರ್ಪಡಿಸಲಾಗಿದೆ.

ಆಕಾಶವಾಣಿ, ಮೈಸೂರು, ಕೃಷಿ ಇಲಾಖೆ, ಮಂಡ್ಯ ಹಾಗೂ ವಿಕಸನ ಸಂಸ್ಥೆ, ಮಂಡ್ಯ ಇವರ ಸಹಯೋಗದೊಂದಿಗೆ, ನಡೆಯುತ್ತಿರುವ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಲ್ಲಿ ರೈತರಿಗೆ ಅವಶ್ಯಕತೆಯಿರುವ ಎಲ್ಲಾ ಕೃಷಿ ತರಬೇತಿಗಳನ್ನು, ಎರ್ಪಡಿಸುವಲ್ಲಿ ಯಶಸ್ವಿಯಾಗಿದೆ. 2009-10ನೇ ಸಾಲಿನಲ್ಲಿ ಪ್ರತಿ ತಿಂಗಳಿಗೆ, ಒಂದು ಕೃಷಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಉದ್ದೇಶವಿದೆ.

ಸಂಸ್ಥೆಯ ದೂರವಾಣಿ ಸಂಖ್ಯೆ: (08232) 231497, 231293

-ಎಸ್. ಬಾಲಸುಬ್ರಮಣಿಯನ್,
ನಿರ್ದೇಶಕರು
ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ,
ಮಂಡ್ಯ.









No comments:

Post a Comment