Monday, August 3, 2009

ಪರಿಸರ ಸ್ನೇಹಿ ಗಿಡಮೂಲಿಕೆಗಳ ಸೊಳ್ಳೆ ನಿವಾರಕ ಅಗರಬತ್ತಿ
ಬಸವ
ಈಗ ಲಭ್ಯವಿರುವ ನಾಗರಿಕ ಸಮಾಜದ ಸೊಳ್ಳೆ ಬತ್ತಿಗಳು ಲಿಕ್ವಿಡ್ ವೆಪರೈಸರ್ ಗಳು ಹಾಗೂ ರೆಪಲೆಂಟ್ಗಳನ್ನು ಬಳಸುವ ಜನರು ಇದರಿಂದ ಉತ್ಪತ್ತಿಯಾಗುವ ವಿಷವನ್ನು ಸೇವಿಸಿ ಅಲ್ಸರ್, ಶ್ವಾಶಕೋಶದ ಕ್ಯಾನ್ಸರ್, ನೆಗಡಿ, ಅಲರ್ಜಿ ಹೀಗೆ ಹಲವಾರು ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಸೊಳ್ಳೆ ಬತ್ತಿಯಲ್ಲಿ ಲಿತ್ರೀನ್ ಎಂಬ ವಿಷಕಾರಿಕ ರಸಾಯನಿಕ ದ್ರವವನ್ನು ಸೇರಿಸಿರುವುದರಿಂದ ಸೊಳ್ಳೆಗಳು ತಾತ್ಕಾಲಿಕವಾಗಿ ಮೂರ್ಛೆ ಹೋಗುವಂತೆ ಮಾಡುತ್ತದೆ ಅಷ್ಟೆ ವಿನಹ ಸಂಪೂರ್ಣವಾಗಿ ಕೊಲ್ಲಲಾರದು. ವಿಷಕಾರಿ ಅನಿಲವನ್ನು ಮಾನವ ಜನಾಂಗ ದಿನನಿತ್ಯ ಸೇವಿಸುವುದರಿಂದ ಮೇಲೆ ಹೇಳಿರುವ ಕಾಯಿಲೆಗಳಿಗೆ ತುತ್ತಾಗಿ ಬಳಲುವುದಲ್ಲದೆ ತನ್ನ ಹಣವನ್ನು ಔಷಧಿಗಳು ಹಾಗೂ ವೈದ್ಯರುಗಳಿಗೆ ಕಳೆದುಕೊಂಡು ತನ್ನ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಾನೆ.
ಸ್ಥಳೀಯ ತಂತ್ತಜ್ಞಾನ ಬಳಸಿಕೊಂಡು ಆರೋಗ್ಯಕ್ಕೆ ಅನುಕೂಲವಾಗುವಂತೆ ಮನೆ ಪರಿಸರವನ್ನು ಸುವ್ವಾಸನೆ ಭರಿತವಾಗಿಸುವ ಪರಿಸರಸ್ನೇಹಿ ಗಿಡ ಮೂಲಿಕೆಗಳ ಸೊಳ್ಳೆ ನಿವಾರಕ ಬೆರಣಿ ವಿಚಾರವನ್ನು ಶಿವಮೊಗ್ಗದ ರಾಮಚಂದ್ರಪುರದ ಮಠದ ವಸ್ತು ಪ್ರದರ್ಶನದಲ್ಲಿ ನೋಡಿ ಪ್ರೇರಣೆಗೊಂಡ ನಾನು ವಿವಿಧ ಬಗೆಯ ಮರಗಿಡಗಳ ಎಲೆಯನ್ನು ಬಳಸಿ ಸಗಣಿ ಮತ್ತು ಗೋಮೂತ್ರದೊಂದಿಗೆ ಬೆರೆಸಿ ಸೊಳ್ಳೆ ಬತ್ತಿಯನ್ನು ತಯಾರು ಮಾಡಿ ಉರಿಸಿದಾಗ ಒಳ್ಳೆಯ ಫಲಿತಾಂಶ ದೊರೆಯಿತು.
ಒಂದು ವರ್ಷ ಹಿಂದೆಯೇ ಮೇಲುಕೋಟೆಯ ಸಿಂಗಾಪುರದಲ್ಲಿ ನಡೆದ ಬಾನುಲಿ ಕೃಷಿ ಬೆಳಗು ಹಾಗೂ ಸಾವಯವ ಗ್ರಾಮ ಕಾರ್ಯಕ್ರಮದಲ್ಲಿ ಬಾನುಲಿ ಕೋಗಿಲೆ ಎಂಬ ಬಿರುದು ಪಡೆದ ಎನ್.ಕೇಶವಮೂರ್ತಿ ಮತ್ತು ಏಳು ಜಿಲ್ಲೆಯ ರೈತರುಗಳು ಸೇರಿ ಐದು ಸ್ವಾವಲಂಬಿ ಉತ್ಪನ್ನಗಳನ್ನು ಮುಂದಿನ ವರ್ಷದ ಬಾನುಲಿ ಕೃಷಿಕರ ಸಮಾವೇಶದಲ್ಲಿ ಬಿಡುಗಡೆ ಮಾಡಬೇಕೆಂದು ತೀರ್ಮಾನಿಸಿದೆವು . ಸ್ಥಳೀಯ ತಂತ್ರಜ್ಞಾನವನ್ನು ಬಂಡವಾಳವಾಗಿ ಬಳಸಿ ರೈತರ ಸ್ವಾವಲಂಬಿ ಉತ್ಪನ್ನವಾಗಿ ಬಿಡುಗಡೆ ಮಾಡಬಹುದು ಎಂದು ಚರ್ಚೆಯಲ್ಲಿ ಮಂಡಿಸಿದೆ. ಇದಕ್ಕೆ ಧ್ವನಿ ಸೇರಿಸಿದ ಬಾನುಲಿ ಕೃಷಿ ಬಳಗದವರಾದ ಪಿರಿಯಾಪಟ್ಟಣದ ಬೂದಿತಿಟ್ಟು ಗ್ರಾಮದ ನಿವಾಸಿ ಬಿ.ಆರ್.ವೆಂಕಟೇಶ್, ರೀತಿಯ ಬೆರಣಿಯನ್ನು ಕೊಟ್ಟಿಗೆಯಲ್ಲಿ ಸೊಳ್ಳೆ ನಿವಾರಿಸಲು ಬಳಸುತ್ತಿರುವ ವಿಚಾರವನ್ನು ಮಂಡಿಸಿದರು.
ತಂತ್ರಜ್ಞಾನವನ್ನು ಕಾರ್ಯರೂಪಕ್ಕೆ ತರುವುದೆಂದು ನಿರ್ಧರಿಸಿ ಚರ್ಚೆಯಲ್ಲಿ ತೀರ್ಮಾನ ತೆಗೆದುಕೊಂಡು ರೈತರ ಉತ್ಪನ್ನವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು .
ದಿನದಿಂದ ನಾನು ಇದರ ಪ್ರಯೋಗವನ್ನು ಪುನರಾವರ್ತನೆ ಮಾಡಿ ಎಲೆಗಳ ಮಿಶ್ರಣವನ್ನು ಬೆರಣಿ ಆಕಾರದಿಂದ ಅಗರಬತ್ತಿ ರೂಪಕ್ಕೆ ತರಲಾಯಿತು. ಸಗಣಿ ಮತ್ತು ಗೋಮೂತ್ರವನ್ನು ಕಚ್ಚಾವಸ್ತುವಾಗಿ ಬಳಸಿರುವುದರಿಂದ ಬಸವ ಪರಿಸರ ಸ್ನೇಹಿ ಗಿಡಮೂಲಿಕೆಗಳ ಸೊಳ್ಳೆ ನಿವಾರಣೆ ಅಗರಬತ್ತಿಯೆಂದು ಹೆಸರಿಡಲಾಯಿತು.
ಇದನ್ನು ಕೃಷಿಕಲ್ಪ (ಕೃಷಿಕರ ಮಂತ್ರ) ತಯಾರಕರು ಹಾಗೂ ಮಾರಾಟಗಾರರು ನಾಮಾಂಕಿತದಿಂದ ದಿನಾಂಕ 17.06.2009ನೇ ಬುಧವಾರ ಬಾನುಲಿ ಕೃಷಿ ಬೆಳಗು ಹಾಗೂ ಬಾನುಲಿ ಕೃಷಿಕರ ರಾಜ್ಯ ಮಟ್ಟದ ಸಮಾವೇಶದಲ್ಲಿ ಲೋಕಾರ್ಪಣೆಯಾಗಿದೆ.
ಬೇಕಾಗುವ ಕಚ್ಚಾ ವಸ್ತುಗಳು: ಸಗಣಿ, ಗೋಮೂತ್ರ, ಗಂಧ, ಬೇವು, ತುಳಸಿ, ಲಕ್ಕಿ, ಮತ್ತು, ಬಿಲ್ವ ಎಲೆಗಳು, ಹರಿಸಿನದ ಪುಡಿ, ಹಸುವಿನ ತುಪ್ಪ, ಇದ್ದಲಿನ ಪುಡಿ ಹಾಗೂ ಬಿದಿರು ಕಡ್ಡಿಗಳು, ಜಿಗಟುಪುಡಿ.
ತಯಾರಿಸುವ ವಿಧಾನ: ಮೇಲೆ ಹೇಳಿರುವ ಎಲ್ಲಾ ರೀತಿಯ ಎಲೆಗಳನ್ನು ಬೇರೆ ಬೇರೆಯಾಗಿ ಶೇಖರಿಸಿ ನೆರಳಿನಲ್ಲಿ ಒಳಗಿಸಿ ಹಿಟ್ಟಿನ ರೂಪದಲ್ಲಿ ಪುಡಿ ಮಾಡಿಕೊಳ್ಳುವುದು. ಇದಕ್ಕೆ ಇದ್ದಲಿನ ಪುಡಿ ಮತ್ತು ಜಿಗಟು ಪಡಿ ಮಿಶ್ರಣವನ್ನು ತಯಾರು ಮಾಡಿಕೊಳ್ಳುವುದು. ನಂತರ ಮಿಶ್ರಣವನ್ನು ಕಾಯಿಸಿ ಆರಿಸಿದ ಹಸುವಿನ ತುಪ್ಪದೊಂದಿಗೆ ಬೆರೆಸಿ ಹಸಿ ಸಗಣಿಯೊಂದಿಗೆ ಕಲಸಿಕೊಳ್ಳುವುದು. ಹಿಟ್ಟಿನ ಹದಕ್ಕೆ ತಕ್ಕಂತೆ ಗೋಮೂತ್ರವನ್ನು ಬಳಸಿಕೊಳ್ಳುವುದು. ಹಿಟ್ಟನ್ನು ನೆನೆಯಲು ಇಡುವುದು. ಹದವಾಗಿ ನೆನೆದ ನಂತರ ಅಗರ ಬತ್ತಿ ಮಾಡುವ ರೀತಿಯಲ್ಲಿ ಬಿದರಿನ ಕಡ್ಡಿಗೆ ತೀಡುವುದು. ಇದಕ್ಕೆ ಅರಿಸಿನಪುಡಿಯನ್ನು ಬಣ್ಣವಾಗಿ ಬಳಸುವುದು. ರೀತಿ ತಯಾರಾದ ಬತ್ತಿಗಳನ್ನು ನೆರಳಿನಲ್ಲಿ ಒಣಗಿಸಿಕೊಳ್ಳುವುದು.
ಉಪಯೋಗಗಳು: ಬೇವು, ಬಿಲ್ವ, ಲಕ್ಕಿ, ಗಂಧ, ತುಳಸಿ ಔಷಧ ಹಾಗೂ ಸುವಾಸನೆ ಗುಣಗಳನ್ನು ಹೊಂದಿರುತ್ತವೆ.
ಅರಿಸಿನ ಬಣ್ಣವಾಗಿ ಉಪಯೋಗವಾಗುತ್ತದೆ ಹಾಗೂ ಔಷಧಿ ಗುಣ ಹೊಂದಿರುತ್ತದೆ.
ತುಪ್ಪ ಮತ್ತು ಇದ್ದಲಪುಡಿ ಬತ್ತಿ ಉರಿಯಲು ಸಹಾಯ ಮಾಡುತ್ತವೆ.
ಸಗಣಿ ಮತ್ತು ಗೋಮೂತ್ರ ಔಷದಿ ಗುಣಗಳನ್ನು ಹೊಂದಿದ್ದು ಪ್ರಯೋಜನಕಾರಿಯಾದ ಅನಿಲವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತವೆ.
-ಕೆ. ವೆಂಕಟೇಶ್, ಎಂ.ಎಸ್ಸಿ (ಬಾಟನಿ),
ಪ್ರಗತಿಪರ ರೈತ, ಜಿ.ಬಿ. ಸರಗೂರು,
ಹಂಪಾಪುರ ಹೋಬಳಿ, ಹೆಚ್ ಡಿ ಕೋಟೆ ತಾಲ್ಲೂಕು,
ಮೈಸೂರು ಜಿಲ್ಲೆ.ಫೋನ್ 9945290334



No comments:

Post a Comment