ಕಂಪನಿ ಸ್ಥಾಪನೆಯತ್ತ ಮಹತ್ವದ ಹೆಜ್ಜೆ
ಕಳೆದ ಮೂರು ವರ್ಷಗಳಲ್ಲಿ ಪ್ರತಿ ತಿಂಗಳು ತಪ್ಪದೆ ಕಾರ್ಯಕ್ರಮ ಏರ್ಪಡಿಸುತ್ತಾ ರೈತರಿಗೆ ಮಾರ್ಗದರ್ಶನ ನೀಡುತ್ತಾ ಬಂದಿರುವ ಬಾನುಲಿ ಕೃಷಿ ಬೆಳಗು ತಂಡವು ಇಂದು( ೬-೮-೦೯ ) ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ . ಬಾನುಲಿ ಕೃಷಿಕರ ಬಳಗದ ಮುಂದಾಳತ್ವದಲ್ಲಿ ಕಂಪನಿ ಒಂದನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ . ಮಂಡ್ಯದ ವಿಬ್ ಸೆಟಿ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಆಕಾಶವಾಣಿಯ ಎನ್.ಕೇಶವ ಮೂರ್ತಿ ,ವಾರ್ತಾ ಇಲಾಖೆಯ ಎ ಆರ್ ಪ್ರಕಾಶ್ ವಿಬ್ ಸೆಟಿ ಯ ಬಾಲಸುಬ್ರಮಣಿಯನ್ ಬಾನುಲಿ ಕೃಷಿಕರ ಬಳಗದ ಅಧ್ಯಕ್ಷ ಬಿ .ವೀರಭದ್ರಯ್ಯ ಸೇರಿ ದಂತೆ ಹಲವು ಬಳಗದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು .ಭದ್ರಾವತಿ ಯಿಂದ ಬಂದಿದ್ದ ಕೆ .ವಿ .ನಾರಾಯಣ್ ,ಬೆಂಗಳೂರಿಂದ ಬಂದಿದ್ದ ಕಂಪನಿ ಸೆಕ್ರೆಟರಿ ಸಲಹೆಗಾರ ಶಶಿಧರ್ ಜಿ.ಎಸ್. ಅವರು ಕಂಪನಿ ರಚಿಸುವ ನಿಯಮಗಳ ಕುರಿತು ಉಪಯುಕ್ತ ಸಲಹೆ ನೀಡಿದರು .
Thursday, August 6, 2009
Subscribe to:
Post Comments (Atom)
No comments:
Post a Comment