Monday, August 3, 2009

ಕೊಬ್ಬು ಕರಗಿಸುವ ತಾಜಾ ತೆಂಗಿನ ಎಣ್ಣೆ
ಕಲ್ಪವೃಕ್ಷ

ಜಿ. ಅನುಷ ವಿನಯ್
ಹೊನ್ನಗಿರಿ ಫಾರಂ, ಚಾಮನಹಳ್ಳಿ
ಮದ್ದೂರು ತಾಲ್ಲೂಕು
ಮಂಡ್ಯ ಜಿಲ್ಲೆ ಮೊಬೈಲ್ - 9449785914

ನನ್ನ ಹೆಸರು ಅನುಷ ವಿನಯ್. ನನ್ನ ಪತಿಯವರು ಮಾಡುತ್ತಿರುವ ತೋಟಗಾರಿಕೆ ಮತ್ತು ವ್ಯವಸಾಯದಲ್ಲಿ ನಾನು ಸಹ ಭಾಗಿಯಾಗಿ ಅವರ ಜೊತೆ ಜೊತೆಯಲ್ಲಿ ಇದ್ದು ಸಹಕರಿಸುತ್ತಿದ್ದೇನೆ. ನನಗೂ ತೋಟಗಾರಿಕೆಯಲ್ಲಿ ತುಂಬಾ ಆಸಕ್ತಿ ಇದೆ. ನಾನು ನನ್ನ ಪತಿಯವರು ರೇಡಿಯೋ ಕೇಳುಗರು. ಇದರಲ್ಲಿ ಮೈಸೂರು ಆಕಾಶವಾಣಿ ಕೃಷಿರಂಗ ಕಾರ್ಯಕ್ರಮ ದಿನ ಬೆಳಿಗ್ಗೆ ಸಂಜೆ ಬರುತ್ತದೆ. ಇದು ಅತ್ಯುತ್ತಮವಾದ ಕಾರ್ಯಕ್ರಮ. ರೈತರಿಗೋಸ್ಕರ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮವನ್ನು ವೆಬ್ ಸೆಟಿ ಯಲ್ಲಿ ಹಮ್ಮಿಕೊಂಡಿದ್ದಾರೆ ಎಂದು ತಿಳಿದು, ನಾನು ನನ್ನ ಪತಿ 2 ವರ್ಷದ ಹಿಂದೆ ಅಲ್ಲಿಗೆ ಭೇಟಿ ಕೊಟ್ಟಿದ್ದೆವು. ಅಂದಿನಿಂದ ನಾವು ನಿರಂತರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ.
ಮೈಸೂರು ಆಕಾಶವಾಣಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಲ್ಲಿ ವಿಜಯಾ ಬ್ಯಾಂಕ್, ವಿಕಸನ, ವಿ.ಸಿ. ಫಾರಂ ಇನ್ನಿತರ ಸಂಸ್ಥೆ ಭಾಗಿಯಾಗಿರುತ್ತವೆ. ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಲ್ಲಿ ಕೃಷಿ ಬಗ್ಗೆ, ಮಾರ್ಕೆಟಿಂಗ್ ಬಗ್ಗೆ ಸ್ವಾವಲಂಬನೆಯಾಗಲು ಮಾಡಿಕೊಳ್ಳುವ ಪದಾರ್ಥಗಳ ಪ್ರಾತ್ಯಕ್ಷತೆ ಮತ್ತು ಮಾಹಿತಿಯನ್ನು ಸಂಸ್ಥೆಯವರು ಒದಗಿಸುತ್ತಿದ್ದಾರೆ. ನಾವು, ಮೈಸೂರು ಆಕಾಶವಾಣಿಯ ಬಾನುಲಿ ಕೃಷಿ ಬೆಳಗು ತಂಡದವರು, ವಿಜಯಾ ಬ್ಯಾಂಕ್, ವಿಕಸನ ಸಂಸ್ಥೆಯವರು ಎಲ್ಲರೂ ಸಹ ಪ್ರವಾಸಕ್ಕೆ ಹೋಗಿದ್ದೆವು . ಪ್ರವಾಸದಲ್ಲಿ ತುಮಕೂರಿಗೆ ಹೋಗಿದ್ದೆವು . ಅಲ್ಲಿ ಶಿರಸಿ ಎಂಬ ಊರಿನ ಹತ್ತಿರ ಇರುವ ಅನಿತ ನೀಲಕಂಠ ಮೂರ್ತಿ ವಾದೇಕರ್ ಫಾರಂಗೆ ಹೋಗಿದ್ದೆವು. ಅಲ್ಲಿ ನಮಗೆ ಸ್ವಾವಲಂಬನೆಯಾಗಿ ಬದುಕಲು ನಮ್ಮಲ್ಲಿ ಸಿಗುವ ಪದಾರ್ಥಗಳನ್ನು ಉಪಯೋಗಿಸಿ ದಿನನಿತ್ಯ ಬಳಸುವ ಪದಾರ್ಥಗಳನ್ನು ಅವರು ಮಾಡಿ ತೋರಿಸಿಕೊಟ್ಟರು.
ಅವರು ನಮಗೆ ಅದರ ಬಗ್ಗೆ ಮಾಹಿತಿಯನ್ನು ಕೊಟ್ಟರು ಮತ್ತು ಅವರು ಇದನ್ನು ಮಾರ್ಕೆಟಿಂಗ್ ಸಹ ಮಾಡುತ್ತಿದ್ದಾರೆ. ನಂತರ ನಮ್ಮ ವೆಬ್ಸಿಟಿಯಲ್ಲಿ ವಿಜಯಾ ಬ್ಯಾಂಕ್ನವರು ಸುಸ್ಥಿರ ಸ್ವಾವಲಂಬನೆ ಬದುಕಿಗಾಗಿ ಅಗತ್ಯ ವಸ್ತುಗಳನ್ನು ನಾವೇ ತಯಾರಿಸಿಕೊಳ್ಳುವ ಬಗ್ಗೆ 5 ದಿನದ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಾವು ಅದರಲ್ಲಿ ಭಾಗವಹಿಸಿದ್ದೇವೆ. ಅದರಲ್ಲಿ ನೀಲಕಂಠಮೂತರ್ಿಯವರ ಕಾರ್ಯಕ್ರಮ ಒಂದು ದಿನ ಇತ್ತು. ಅವರು ಸೋಪು, ಕೊಬ್ಬರಿ ಎಣ್ಣೆ, ನೋವಿನ ಎಣ್ಣೆ, ಹುತ್ತದ ಮಣ್ಣಿನ ಸೋಪನ್ನು ತಯಾರಿಸುವುದನ್ನು ಪ್ರಾತ್ಯಕ್ಷತೆಯಲ್ಲಿ ತೋರಿಸಿಕೊಟ್ಟರು. ಇದರಲ್ಲಿ ನಾನು ತಾಜಾ ತೆಂಗಿನ ಎಣ್ಣೆಯ ಬಗ್ಗೆ ತುಂಬಾ ಆಕರ್ಷಿತ ಳಾದೆ. ಏಕೆಂದರೆ ನಮ್ಮಲ್ಲಿ ತೆಂಗಿನ ತೋಟ ಇರುವುದರಿಂದ ಎಣ್ಣೆ ಮಾಡುವುದು ಸುಲಭ ಎನಿಸಿತು. ಆದರೆ ನೀಲಕಂಠ ಮೂರ್ತಿ ಅವರು ಅವರ ತೋಟದಲ್ಲಿ ಅವರೇ ಮಾಡಿಸಿರುವ ಯಂತ್ರದಲ್ಲಿ ಎಣ್ಣೆ ತೆಗೆದು ತೋರಿಸಿದ್ದರು. ನಮ್ಮಲ್ಲಿ ಯಂತ್ರ ಇಲ್ಲದಿರುವ ಕಾರಣ ನನ್ನ ಪತಿಯವರು ನನಗೆ ಶಾವಿಗೆ ಹೊರಳಲ್ಲಿ ಮಾಡುವ ಯೋಜನೆ ಕೊಟ್ಟರು. ನಾನು ಹಾಗೇ ಮಾಡಿ ಆಯಿಲ್ ತೆಗೆದು ಅಡುಗೆಗೆ ಬಳಸಿದೆ. ಚೆನ್ನಾಗಿದೆ ಅನ್ನಿಸಿದೆ. ಇದನ್ನು ತಿಂಡಿಗೆ ಬಳಸಬಹುದು. ಹಾಗೇಯೇ ಇದನ್ನು ಬಾಡಿ ಆಯಿಲ್ ಆಗಿಯೂ ಬಳಸಬಹುದು. ಇದರಿಂದ ಚರ್ಮ ಹೊಳಪಾಗುತ್ತದೆ ಹಾಗೂ ಕೂದಲಿಗೆ ಸಹ ಬಳಸಬಹುದು.
ಇದು ಗಟ್ಟಿಯಾದಾಗ ಚಪಾತಿ, ರೊಟ್ಟಿಗೆ ಬೆಣ್ಣೆಯ ತರಹ ಉಪಯೋಗಿಸಬಹುದು. ಇದು ರುಚಿಕರವಾದ ಎಣ್ಣೆ. ಯಾವುದೇ ಕೊಬ್ಬಿನ ಅಂಶ ಇಲ್ಲ. ಇದನ್ನು ಮಕ್ಕಳಿಂದ ವಯೋವೃದ್ದರೂ ಉಪಯೋಗಿಸಬಹುದು. ಪೌಷ್ಠಿಕವಾದ ಆಯಿಲ್ ಇದು. ಇದು ಅತ್ಯುತ್ತಮವಾದ ಗುಣಮಟ್ಟದ ಎಣ್ಣೆ. ತಾಯಿ ಎದೆ ಹಾಲಿನಲ್ಲಿ ಲೋರಿಕ್ ಆಸಿಡ್ ಎಂಬ ಅತ್ಯುತ್ತಮಾದ ಪೌಷ್ಠಿಕತೆ ಇರುವ ಗುಣಮಟ್ಟದ ಅಂಶ ಅಡಗಿದೆ. ಇದು ತುಂಬಾ ಅತ್ಯುತ್ತಮವಾದುದು. ಇದನ್ನು ತಾಯಿ ಎದೆ ಹಾಲಿನಲ್ಲಿ ಬಿಟ್ಟರೆ ಲೋರಿಕ್ ಆಸಿಡ್ ಎಂಬ ಅಂಶವು ತಾಜಾ ತೆಂಗಿನ ಎಣ್ಣೆಯಲ್ಲಿ ಮಾತ್ರ ಇದೆ.
ಇದನ್ನು ಮಾಡುವ ವಿಧಾನ: ಬಲಿತಿರುವ ಕಾಯನ್ನು ತುರಿದು ಕೆಂಪಗೆ ಹುರಿದು ಶಾವಿಗೆ ಹೊರಳಿಗೆ ಹಾಕಿ ತಿರುಗಿಸಿದರೆ ಎಣ್ಣೆ ಬರುತ್ತದೆ. ಎಣ್ಣೆ ಸೋಸಿ ಬಾಟಲಿನಲ್ಲಿ ಶೇಖರಿಸಿ ಇಟ್ಟುಕೊಳ್ಳಿ. ಇದರ ಮಿಕ್ಕಿದ ತೆಂಗಿನ ಪುಡಿಯನ್ನು ಬಿಸ್ಕೆಟ್, ಮಿಠಾಯಿ, ಅಡುಗೆಗೂ ಸಹ ಉಪಯೋಗಿಸಬಹುದು. ಮತ್ತೆ ಕೃಷಿಕರು ಹಸುವಿಗೆ ಹಿಂಡಿಯ ತರಹ ತಿನ್ನಲಿಕ್ಕೆ ಕೊಡಬಹುದು.
ನಾವು ಕೇಳಿ ತಿಳಿದುದೇನೆಂದರೆ ಬಿಪಿ, ಸಕ್ಕರೆ ಕಾಯಿಲೆ ಇರುವವರು ದಿನನಿತ್ಯ ತಾಜಾ ತೆಂಗಿನ ಎಣ್ಣೆಯನ್ನು 20 ಎಂ.ಎಲ್.ನಂತೆ ಸೇವಿಸಿದರೆ ಕಾಲಕ್ರಮೇಣ ಬಿಪಿ, ಸಕ್ಕರೆ ಕಾಯಿಲೆ ತಹಬದಿಗೆ ಬರುತ್ತದೆ. ಇದರಲ್ಲಿ ಯಾವುದೇ ಕೊಬ್ಬಿನ ಅಂಶ ಇಲ್ಲ. ಪಾಶ್ಚಾತ್ಯರು ಹೇಳುವಂತೆ ಇದರಲ್ಲಿ ಕೊಬ್ಬಿನ ಅಂಶ ಇದ್ದಿದ್ದರೆ ನೂರಾರು ವರ್ಷದಿಂದ ಮಂಗಳೂರು ಮತ್ತು ಕೇರಳದವರು ಕೊಬ್ಬಿನ ಅಂಶದ ಕಾಯಿಲೆಯಿಂದ ನರಳಬೇಕಾಗಿತ್ತು. ತಾಜಾ ಕೊಬ್ಬರಿ ಎಣ್ಣೆಯು ಕೊಬ್ಬಿನ ಅಂಶ ಕಡಿಮೆ ಮಾಡುತ್ತದೆ. ಇದರ ಬಳಕೆಯಿಂದ ಮಾನವನ ಶರೀರದಲ್ಲಿ ಯಾವುದೇ ರೀತಿಯ ಕೊಬ್ಬಿನ ಅಂಶ ಹೆಚ್ಚುವುದಿಲ್ಲ. ಬದಲಿಗೆ ಅವರ ಆರೋಗ್ಯ ಉತ್ತಮವಾಗುತ್ತಿದೆ. ಯಾವುದೇ ತಪ್ಪು ಕಲ್ಪನೆ ಇಲ್ಲದೆ ಇದನ್ನು ನಿರಂತರವಾಗಿ ಉಪಯೋಗಿಸಿ ನಮ್ಮಲ್ಲಿ ಸಿಗುವ ಅತ್ಯುತ್ತಮ ತೆಂಗಿನ ಎಣ್ಣೆಯನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮಪಡಿಸಿಕೊಳ್ಳಿ.
ಮೈಸೂರು ಆಕಾಶವಾಣಿಯವರಿಗೆ, ವಿಜಯಾ ಬ್ಯಾಂಕ್ ಹಾಗೂ ವಿಕಸನದವರಿಗೆ ನಮ್ಮ ಧನ್ಯವಾದಗಳು.
ಇಂತಿ
ಜಿ. ಅನುಷ ವಿನಯ್

No comments:

Post a Comment