Saturday, August 1, 2009

ನೇಗಿಲಯೋಗಿ ಬಿಡುಗಡೆ
ಬಾನುಲಿ ಕೃಷಿಕರ ರಾಜ್ಯ ಮಟ್ಟದ ಸಮಾವೇಶ ಮಂಡ್ಯದಲ್ಲಿ ನಡೆಯಿತು . ಬಾನುಲಿ ಕೃಷಿಕರು ತಯಾರಿಸಿದ ವಿವಿಧ ಉತ್ಪನ್ನಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಬಾನುಲಿ ಕೃಷಿಕರು ಆಂತರಿಕ ಪ್ರಸಾರಕ್ಕಾಗಿ ರೂಪಿಸಿಕೊಂಡಿರುವ ಪತ್ರಿಕೆ ನೇಗಿಲ ಯೋಗಿ
ಪತ್ರಿಕೆಯನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ವಾರ್ತಾಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಪತ್ರಿಕೆಯನ್ನು ಬಿಡುಗಡೆ ಮಾಡಿ ಪತ್ರಿಕೆ ರೂಪಿಸುವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು . ವಾರ್ತಾ ಇಲಾಖೆಯಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದರು.ನೇಗಿಲ ಯೋಗಿ ಪತ್ರಿಕೆ ಯಲ್ಲಿ ರೈತರೇ ಲೇಖನಗಳನ್ನು ಬರೆಯುತ್ತಿದ್ದಾರೆ .ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

No comments:

Post a Comment