Monday, August 3, 2009


ಬಾನುಲಿ ಕೃಷಿ ಬೆಳಗು ಬೆಳೆದು ಬಂದ ದಾರಿ

ಮೈಸೂರು ಆಕಾಶವಾಣಿ ಕೃಷಿ ರಂಗ ವಿಭಾಗವೂ ಪ್ರತಿ ದಿನ ಬೆಳಿಗ್ಗೆ 6.35 ಮತ್ತು ಸಾಯಂಕಾಲ 6.50ಕ್ಕೆ ರೈತರಿಗಾಗಿ ಸಲಹೆ ಮತ್ತು ಕೃಷಿ ವಿಜ್ಞಾನಿಗಳನ್ನ ಕಾಲಕಾಲಕ್ಕೆ ಸಂದರ್ಶನ ಮಾಡಿ ಪ್ರತಿ ತಿಂಗಳು ಪ್ರತಿ ವಾರವು ಕಾರ್ಯಕ್ರಮಗಳನ್ನು ನೀಡುತ್ತಿದೆ . ನಾನು ಹಾಗು ನಮ್ಮಂತ ರೈತರುಗಳು ಅವುಗಳನ್ನ ಅನುಸರಿಸಿ (ಕೃಷಿಕರು) ಬೆಸಾಯವನ್ನು ಮಾಡುತ್ತಿದ್ದೇವೆ .
ಇದನ್ನ
ಅನುಸರಿಸಿ ವಿ.ಸಿ.ಫಾರಂನಲ್ಲಿ ೯/೫/೦೬ ಕ್ಕೆ ಮೊದಲ ಕಾರ್ಯಕ್ರಮ ನಡೆಯಿತು. ಮಂಡ್ಯದ ವಿಜಯ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆ ಕೈ ಜೋಡಿಸಿ, 6 ಕಾರ್ಯಕ್ರಮಗಳು ಸಂಸ್ಥೆಯ ಅಡಿಯಲ್ಲಿ ಇನ್ನು 6 ಕಾರ್ಯಕ್ರಮಗಳು ವಿ.ಸಿ.ಫಾರಂನಲ್ಲಿ ನಡೆಯುವಂತೆ ತೀರ್ಮಾನವಾಗಿ ಕಾರ್ಯಕ್ರಮಕ್ಕೆ, ಒಂದು ಹೆಸರು ಕೊಟ್ಟರು. ಅದು ಬಾನುಲಿ ಕೃಷಿ ಮಾಹಿತಿ ಧಾರಣಾ ಶಕ್ತಿ ವೃದ್ಧಿ ಕಾರ್ಯಕ್ರಮ ಎಂದು ನಾಮಕರಣವಾಯಿತು. ಕಾರ್ಯಕ್ರಮಗಳಲ್ಲಿ ಪ್ರತಿ ತಿಂಗಳು ಎರಡು ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತಿತ್ತು.
ಕಾರ್ಯಕ್ರಮದಲ್ಲಿ ಹಿಂದಿನ ತಿಂಗಳು ಆಕಾಶವಾಣಿ 100.6 ಮೈಸೂರಿನಲ್ಲಿ ಬಿತ್ತರಗೊಂಡ ಕೃಷಿ ಕಾರ್ಯಕ್ರಮಗಳ ಬಗ್ಗೆ ಒಂದು ಕಿರು ಪರೀಕ್ಷೆಯನ್ನು ನಡೆಸಿ ಅದರಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಮೊದಲ ಮೂವರಿಗೆ ರೇಡಿಯೋಗಳನ್ನ ನೀಡಿ ಪ್ರಶಸ್ತಿ ಪತ್ರಗಳನ್ನು ನೀಡುತ್ತಿದ್ದರು. ಇದರ ಜೊತೆಗೆ ಭಾಗವಹಿಸಿದ ರೈತರಿಗೆ ಕೃಷಿಯಲ್ಲಿ ಇತ್ತೀಚಿನ ತಾಂತ್ರಿಕತೆಗಳ ಬಗ್ಗೆ ಮಾಹಿತಿಗಳನ್ನ ನೀಡಲಾಯಿತು. ಭತ್ತದ ಬೇಸಾಯ, ಕಬ್ಬಿನ ಬೇಸಾಯ, ರಾಗಿ ಬೇಸಾಯ, ಮೇವಿನ ಬೆಳೆಗಳು, ಔಷಧಿ ಮತ್ತು ಸುಗಂದ ದ್ರವ್ಯ ಸಸ್ಯಗಳು, ಒಂಟಿ ಎತ್ತಿನ ನೇಗಿಲು, ಒಂಟಿ ಕಣ್ಣಿನ ಕಬ್ಬಿನ ಬೇಸಾಯ, ಜೇನು ಕೃಷಿ, ಅಸ್ತ್ರವಲೆ, ಅಣಬೆ ಬೇಸಾಯ, ಮೌಲ್ಯವರ್ದಿತ ರಾಗಿ ಮತ್ತು ಮುಸುಕಿನ ಜೋಳದ ಉತ್ಪನ್ನಗಳ ಬಗ್ಗೆ ತರಬೇತಿಯನ್ನ ನೀಡಲಾಗಿತ್ತು.
ಹನ್ನೆರಡು ತಿಂಗಳು ನಿರಂತರವಾಗಿ ಜರುಗಿದ ಕಾರ್ಯಕ್ರಮದ ಸವಿನೆನಪಿಗಾಗಿ ರೈತರೇ ಹೊರ ತಂದ ಕೃಷಿ ವಿಜಯವಾಣಿ ಸ್ಮರಣ ಸಂಚಿಕೆ ಬಿಡುಗಡೆಯಾಯಿತು. ಅದು ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರ ಸಾಧನೆಗಳ ಬಗ್ಗೆ ಕಿರುಪರಿಚಯವನ್ನ ಒಳಗೊಂಡಿತ್ತು.
ಕಾರ್ಯಕ್ರಮ ಮುಗಿದ ನಂತರ ಇದು ಮುಂದೆ ನಡೆಯಬೇಕೆ ಬೇಡವೆ ಎಂದು ತರ್ಕ ಮಾಡಲಾಗಿ ಮುಂದಿನ ವರ್ಷದಿಂದ ರೈತರ ತಾಕಿನಲ್ಲಿ ನಡೆಯಬೇಕು ಎಂದು ಎಲ್ಲಾ ರೈತರು ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಂಡರು. ಅದಕ್ಕೆ ಆಗಮಿಸಿದ ಮಂಡ್ಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಮತ್ತು ಆಕಾಶವಾಣಿಯ ಮೈಸೂರು, ನಿರ್ದೇಶಕರು ಮತ್ತು ವಿಜಯ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆ ಮಂಡ್ಯ, ಹಾಗೂ ವಿ.ಸಿ.ಫಾರಂ, ಅಧಿಕಾರಿಗಳು ಇದನ್ನ ಒಪ್ಪಿದರು.
ಆದರೆ ಮಂಡ್ಯದಲ್ಲಿ ನಡೆಯುವ ರೈತರ ತಾಕಿನಲ್ಲಿ ಇತರ ರೈತರಿಗೆ ಮಾದರಿಯಾಗುವಂತೆ ಕಾರ್ಯಕ್ರಮದಲ್ಲಿ ಇರಬೇಕು ಎಂದು ಮತ್ತು ಕಾರ್ಯಕ್ರಮದಲ್ಲಿ ನುರಿತ ವಿಜ್ಞಾನಿಗಳು ಮತ್ತು ಪ್ರಗತಿ ಪರ ರೈತರನ್ನು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಕರೆದು ಮಾಹಿತಿಗಳನ್ನ ಕೊಡುವಂತೆ ತೀರ್ಮಾನವಾಗಿ ಕಾರ್ಯಕ್ರಮಕ್ಕೆ ಬಾನುಲಿ ಕೃಷಿ ಬೆಳಗು ಎಂದು ನಾಮಕರಣ ಮಾಡಲಾಯಿತು.
ಕಾರ್ಯಕ್ರಮವು ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಯುವಂತೆ ಎಲ್ಲಾ ಅಧಿಕಾರಿಗಳು ಮತ್ತು ರೈತರು ತೀರ್ಮಾನವಾಗಿ 24.06.2007ರಿಂದ ಪ್ರಾರಂಭಗೊಂಡು ಎರಡು ವರ್ಷ 26.04.2009ಕ್ಕೆ ಮುಗಿಯಿತು. ಇದರ ಮಧ್ಯೆ ಅಕ್ಟೋಬರ್ ನಲ್ಲಿ ಮೂರು ದಿನಗಳ ಪ್ರವಾಸವನ್ನ ರೈತರು ಕೈಗೊಂಡರು. ಮೇ ತಿಂಗಳಿನಲ್ಲಿ ಕೇರಳದ ವೈನಾಡಿಗೆ ಮೂರು ದಿನಗಳ ಪ್ರವಾಸ ಕೈಗೊಂಡು ಎಲ್ಲಾ ಕಾರ್ಯಕ್ರಮಗಳು ಬಹಳ ಚೆನ್ನಾಗಿ ನಡೆದುಕೊಂಡು ಬಂದಿತು. ಹಾಗೂ ಜೂನ್ ತಿಂಗಳು 2009- 17ನೇ ತಾರೀಕು ರಾಜ್ಯ ಮಟ್ಟದ ಕಾರ್ಯಕ್ರಮವನ್ನು ನಡೆಸಲಾಯಿತು. . ಎಲ್ಲಾ ರೈತರು ಬಹಳ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. .

-ಕುಂಬಳಕಾಯಿ ಕೆ.ಸಿ.ಶಿವರಾಮೇಗೌಡ,
ಕೀಲಾರ
ಹಾಗೂ
ಭಾಸ್ಕರ್ ತರಣಿಮಂಟಿ
ಗುಂಡ್ಲುಪೇಟೆ ತಾ||,
ಮೈಸೂರು ಜಿಲ್ಲೆ. ಫೋನ್ 9945616044






No comments:

Post a Comment